Close Menu
    Facebook X (Twitter) Instagram YouTube
    Facebook X (Twitter) Instagram YouTube
    Sanjedarshan
    Subscribe
    • ಇದೀಗ ಬಂದ ಸುದ್ದಿ
    • ಬಾಗಲಕೋಟೆ
    • ಇತರ ಜಿಲ್ಲಾ ಸುದ್ದಿ
    • ಸಿನೆಮಾ
    • ರಾಜ್ಯ
    • ರಾಷ್ಟ್ರೀಯ
    • ಕ್ರೀಡಾ ಸುದ್ದಿ
    • EPaper
    Facebook X (Twitter) Instagram
    Sanjedarshan
    Home»ಇದೀಗ ಬಂದ ಸುದ್ದಿ»ಸಂವಿಧಾನ ಪಾಲನೆಯೇ ನಿಜವಾದ ಗೌರವ : ಮಲ್ಲಿಕಾರ್ಜುನ ಚರಂತಿಮಠ
    ಇದೀಗ ಬಂದ ಸುದ್ದಿ

    ಸಂವಿಧಾನ ಪಾಲನೆಯೇ ನಿಜವಾದ ಗೌರವ : ಮಲ್ಲಿಕಾರ್ಜುನ ಚರಂತಿಮಠ

    SanjeBy SanjeApril 14, 20241 Min Read

    ಬಾಗಲಕೋಟೆ : ಸಂವಿಧಾನಶಿಲ್ಪಿ ಡಾ|ಅಂಬೇಡ್ಕರ ಅವರು ನೀಡಿದ ಸಂವಿಧಾನ, ಅವರ ಆಶಯಗಳನ್ನು ನಿತ್ಯವೂ ನಾವು ಪಾಲನೆ ಮಾಡುವುದೇ ನಿಜವಾಗಿ ನೀಡುವ ಗೌರವ ಎಂದು ಚರಂತಿಮಠ ಮತ್ತು ವಸ್ತ್ರದ ಫೌಂಡೇಶನ್ ಅಧ್ಯಕ್ಷ ಮಲ್ಲಿಕಾರ್ಜುನ ಚರಂತಿಮಠ ಹೇಳಿದರು.

    ನಗರದಲ್ಲಿ ಚರಂತಿಮಠ ಮತ್ತು ವಸ್ತ್ರದ ಫೌಂಡೇಶನ್‌ದಿಂದ ಪೌರ ಕಾರ್ಮಿಕರಿಗೆ ಸನ್ಮಾನಿಸುವ ಮೂಲಕ ಅಂಬೇಡ್ಕರ ಜಯಂತಿ ಆಚರಿಸಿ ಅವರು ಮಾತನಾಡಿದರು.

    ಬಾಬಾಸಾಹೇಬರು ಸಂವಿಧಾನವನ್ನು ಈ ದೇಶಕ್ಕೆ ಒಂದು ದೊಡ್ಡ ಕೊಡುಗೆಯಾಗಿ ನೀಡಿದ್ದಾರೆ. ಸಂವಿಧಾನಕ್ಕೆ ಗೌರವ ನೀಡುವ ಜತೆಗೆ, ಸಮುದಾಯದಲ್ಲಿ ಸೌಲಭ್ಯ ವಂಚಿತರಿಗೆ ಸೌಲಭ್ಯ ಕಲ್ಪಿಸುವ ಕಾರ್ಯ ನಾವೆಲ್ಲ ಮಾಡಬೇಕು ಎಂದರು.

    ಯುವ ಮುಖಂಡ ವಿಜಯ ಸುಲಾಖೆ ಮಾತನಾಡಿ, ಬಾಬಾಸಾಹೇಬರ ಬಾಲ್ಯ ಹಾಗೂ ಸಾಮಾಜಿಕ ಜೀವನದ ಬಗ್ಗೆ ಸ್ಮರಿಸಿದರು.

    ಇದಕ್ಕೂ ಮುಂಚೆ ಜಿಲ್ಲಾ ಆಡಳಿತ ಭವನದ ಆವರಣದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರ ಧ್ಯೇಯ ಮತ್ತು ದೂರದೃಷ್ಟಿಯನ್ನು ಸ್ಮರಿಸಲಾಯಿತು. ನಗರಸಭೆಯ ಪೌರ ಕಾರ್ಮಿಕರಿಗೆ ಸನ್ಮಾನಿಸಿ, ಗೌರವಿಸಲಾಯಿತು.

    ಮುಖಂಡರಾದ ಗುರು ಅನಗವಾಡಿ, ಬಸವರಾಜ ಪಾತ್ರೋಟಿ, ಶಂಕರ ಮಗಜಿ, ಮಲ್ಲು ಮಳಿಯನ್ನವರ, ರಾಜು ಬಾಸೂತಕರ, ವಿಷ್ಣು ಮಗಜಿ, ಪಾಂಡು ಜಾಧವ್, ಮಹೇಶ ಸರೋದೆ, ಬೊಮ್ಮಣ ಮಮದಾಪೂರ, ಸುನೀಲ ಲಮಾಣಿ, ವಿನಾಯಕ ಹಾಸಲಕರ, ಮಲ್ಲು ರಾಂಪೂರ, ಹರೀಶ ರಂಗರೇಜ, ಮಲ್ಲು ಸಜ್ಜನ ಹಾಗೂ ಯಮನುರಿ ಕಮಿತಕರ ಮುಂತಾದವರು ಉಪಸ್ಥಿತರಿದ್ದರು.

    Share. Facebook Twitter Pinterest LinkedIn WhatsApp Reddit Tumblr Email

    Related Posts

    July 7, 2025 ಅರ್ಜಿ ಆಹ್ವಾನ

    ಜು.9 ರಂದು ಖಾಲಿ ಹುದ್ದೆಗಳಿಗೆ ನೇರ ಸಂದರ್ಶನ

    July 7, 2025 ಸಿನೆಮಾ

    ‘ಎಲ್ಟು ಮುತ್ತಾ’ ಚಿತ್ರ ಜುಲೈ ಕೊನೆಯ ವಾರದಲ್ಲಿ ಬಿಡುಗಡೆಗೆ

    July 5, 2025 ಬಾಗಲಕೋಟೆ

    ನಾಳೆ ಪ್ರತಿಭಾ ಪುರಸ್ಕಾರ- ಸಾಧಕರಿಗೆ ಸನ್ಮಾನ

    July 5, 2025 ಅರ್ಜಿ ಆಹ್ವಾನ

    ಕ.ರಾ.ಮು.ವಿ. ಪ್ರಥಮ ವರ್ಷದ ಪ್ರವೇಶಾತಿ ಪ್ರಾರಂಭ

    July 5, 2025 ಅರ್ಜಿ ಆಹ್ವಾನ

    ಅಲ್ಪಸಂಖ್ಯಾತ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ

    July 4, 2025 ಸಿನೆಮಾ

    ‘ರಾಮಾಯಣ’ ಚಿತ್ರದ Introduction ವಿಡಿಯೋ ಬಿಡುಗಡೆ

    Facebook X (Twitter) Instagram Pinterest
    • Privacy Policy
    © 2025 Sanjedarshan. Developed by Vikimediatec Pvt Ltd.
    ಮಹೇಶ ಅಂಗಡಿ , ಸಂಪಾದಕರು, ಸಂಜೆದರ್ಶನ ದಿನ ಪತ್ರಿಕೆ, ಶಿವಗಿರಿ ಬಡಾವಣೆ 6ನೇ ಕ್ರಾಸ್, ವಿದ್ಯಾಗಿರಿ, ಬಾಗಲಕೋಟೆ-587102. ಮೋ: 9845228092

    Type above and press Enter to search. Press Esc to cancel.