Close Menu
    Facebook X (Twitter) Instagram YouTube
    Facebook YouTube X (Twitter) Instagram
    Sanjedarshan
    Subscribe
    • ಇದೀಗ ಬಂದ ಸುದ್ದಿ
    • ಬಾಗಲಕೋಟೆ
    • ಸಿನೆಮಾ
    • ಸಣ್ಣ ಸುದ್ದಿಗಳು
    • ಅರ್ಜಿ ಆಹ್ವಾನ
    • EPaper
    • ಲೇಖನಗಳು
    Facebook X (Twitter) Instagram
    Sanjedarshan
    Home»ಬಾಗಲಕೋಟೆ»ನೂತನ ಪಪಂ ಚುನಾವಣೆಗೆ ಪೂಜಾರ ಒತ್ತಾಯ
    ಬಾಗಲಕೋಟೆ

    ನೂತನ ಪಪಂ ಚುನಾವಣೆಗೆ ಪೂಜಾರ ಒತ್ತಾಯ

    ಸಂಜೆ ದರ್ಶನBy ಸಂಜೆ ದರ್ಶನAugust 23, 20251 Min Read
    ಪಿ.ಎಚ್. ಪೂಜಾರ

    ಬೆಂಗಳೂರು: ನೂತನವಾಗಿ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಸಬೇಕೆಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಅವರು ವಿಧಾನ ಪರಿಷತ್‌ನಲ್ಲಿ ಒತ್ತಾಯಿಸಿದರು.

    ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ಚುನಾವಣೆ ನಡೆಸದೆ ಇರುವ ಕಾರಣಕ್ಕೆ ಸ್ಥಳೀಯವಾಗಿ ಜನಪ್ರತಿನಿಧಿಗಳು ಇಲ್ಲದೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದು, ಬಾಗಲಕೋಟೆ ಜಿಲ್ಲೆಯ ಶಿರೂರು, ಲೋಕಾಪೂರ, ವಿಜಯಪುರ ಜಿಲ್ಲೆಯ ಬಬಲೇಶ್ವರ ಮತ್ತು ತಿಕೋಟಾ ಗ್ರಾ.ಪಂ ಪರಿಗಣಿಸಿ ಘೋಷಣೆ ಮಾಡಲಾಗಿದೆ ಎಂದರು.

    ಶಿರೂರು, ಲೋಕಾಪರು, ಬಬಲೇಶ್ವರ ಮತ್ತು ತಿಕೋಟಾ ಪಂಚಾಯಿತಿಗಳನ್ನು ರಚಿಸಲಾಗಿದೆ. ಶಿರೂರು ಪಟ್ಟಣ ಪಂಚಾಯಿತಿಗೆ ಮೀಸಲಾತಿಯನ್ನು ಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದು, ಜಿಲ್ಲಾಧಿಕಾರಿ ವರದಿ ಸ್ವೀಕೃತವಾದ ಕೂಡಲೇ ಅಂತಿಮ ವಾರ್ಡ್ವಾರು ಮೀಸಲಾತಿಯನ್ನು ಪ್ರಕಟಿಸಲು ಕ್ರಮವಹಿಸಲಾಗುತ್ತದೆ ಎಂದು ಪೌರಾಡಳಿತ ಸಚಿವರಾದ ರಹೀಮ್ ಖಾನ್ ಉತ್ತರಿಸಿದರು.

    ಲೋಕಾಪುರ, ಬಬಲೇಶ್ವರ ಮತ್ತು ತಿಕೋಟಾ ಪಟ್ಟಣ ಪಂಚಾಯಿತಿಗೆ ವಾರ್ಡ್ವಾರು ಮೀಸಲಾತಿಯನ್ನು ನಿಗಧಿಪಡಿಸುವ ಸಂಬಂಧ ಜಿಲ್ಲಾಧಿಕಾರಿ ಅವರಿಂದ ೨೦೧೧ರ ಜನಗಣತಿಯ ಅನ್ವಯ ವಾರ್ಡ್ವಾರು ಕ್ಷೇತ್ರ ಪುನರ್ ವಿಂಗಡಣೆ ಮಾಡಿರುವ ಅಂತಿಮ ಅಧಿಸೂಚನೆಯ ಜನಸಂಖ್ಯೆ ಮಾಹಿತಿ ಸ್ವೀಕೃತವಾಗಿದ್ದು ಮೀಸಲಾತಿಯನ್ನು ನಿಗಧಿ ಪಡಿಸಲು ಕ್ರಮವಹಿಸಲಾಗುತ್ತಿದೆ ಎಂದರು.

    ಸುಗಮವಾಗಿ ಆಡಳಿತ ನಡೆಸಲು ತಹಶೀಲ್ದಾರಗಳನ್ನು ಆಡಳಿತಾಧಿಕಾರಿಗಳಾಗಿ ನೇಮಕ ಮಾಡಲಾಗಿದ್ದು, ಕೆಲಸವು ಕುಂಠಿತಗೊಂಡಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದರು.

    Share. WhatsApp Facebook Twitter Pinterest LinkedIn Telegram Reddit Email Copy Link

    Related Posts

    August 26, 2025 ಬಾಗಲಕೋಟೆ

    ದಸರಾ ಉತ್ಸವಕ್ಕೆ ಮುಷ್ತಾಕ್ ಆಹ್ವಾನ ಖಂಡನೀಯ

    August 26, 2025 ಇದೀಗ ಬಂದ ಸುದ್ದಿ

    ಮಸೂದೆ ಅಂಗೀಕಾರ ಸ್ವಾಗತಾರ್ಹ

    August 26, 2025 ಬಾಗಲಕೋಟೆ

    ನಿರಾಣಿ ಹೇಳಿಕೆ ವಾಪಸ್ ಪಡೆಯಲಿ

    August 23, 2025 ಬಾಗಲಕೋಟೆ

    ಹಿಂದೂ ಮಹಾಗಣಪತಿಗೆ ಅದ್ದೂರಿ ಸ್ವಾಗತ

    August 23, 2025 ಬಾಗಲಕೋಟೆ

    ‘ಸ್ಪೃಶ್ಯ’ ತೆಗೆದು ‘ವಿಮುಕ್ತ’ವಾಗಿಸಿ: ಸಿದ್ಧರಾಮೇಶ್ವರ ಸ್ವಾಮೀಜಿ

    August 23, 2025 ಕ್ರೈಂ ನ್ಯೂಸ್

    ಕುಡಿಯಬೇಡವೆಂದ ಪತ್ನಿಯನ್ನೇ ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ

    Facebook YouTube X (Twitter) Instagram
    © 2025 Sanjedarshan. Developed by Vikimediatec Pvt Ltd.
    ಮಹೇಶ ಅಂಗಡಿ, ಸಂಪಾದಕರು, ಸಂಜೆದರ್ಶನ ದಿನ ಪತ್ರಿಕೆ, ಶಿವಗಿರಿ ಬಡಾವಣೆ 6ನೇ ಕ್ರಾಸ್, ವಿದ್ಯಾಗಿರಿ, ಬಾಗಲಕೋಟೆ-587102. ಮೋ: 9845228092
    Privacy Policy | Terms and Conditions | Disclaimer | Affiliate Disclosure

    Type above and press Enter to search. Press Esc to cancel.