Close Menu
    Facebook X (Twitter) Instagram YouTube
    Facebook X (Twitter) Instagram YouTube
    Sanjedarshan
    Subscribe
    • ಇದೀಗ ಬಂದ ಸುದ್ದಿ
    • ಬಾಗಲಕೋಟೆ
    • ಸಿನೆಮಾ
    • EPaper
    • ಅರ್ಜಿ ಆಹ್ವಾನ
    • ಲೇಖನಗಳು
    Facebook X (Twitter) Instagram
    Sanjedarshan
    Home»ಬಾಗಲಕೋಟೆ»ನೂತನ ಕಟ್ಟಡ ಕಾಮಗಾರಿಗೆ ಶಾಸಕ ಮೇಟಿ ಚಾಲನೆ
    ಬಾಗಲಕೋಟೆ

    ನೂತನ ಕಟ್ಟಡ ಕಾಮಗಾರಿಗೆ ಶಾಸಕ ಮೇಟಿ ಚಾಲನೆ

    SanjeBy SanjeJuly 21, 20251 Min Read
    ಮೇಟಿ

    ಬಾಗಲಕೋಟೆ: ನವನಗರದ ಸೆಕ್ಟರ ನಂ.7ರಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಮೆಟ್ರಿಕ್ ನಂತರದ ಇಂಜಿನೀಯರಿಂಗ್ ಮತ್ತು ಮೆಡಿಕಲ್ ಬಾಲಕಿಯರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವಾಯ್.ಮೇಟಿ ಸೋಮವಾರ ಚಾಲನೆ ನೀಡಿದರು.

    ಜಿಲ್ಲಾ ಪಂಚಾಯತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ವಸತಿ ನಿಲಯದ ನೂತನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಆರ್.ಐ.ಡಿ.ಎಫ್ ಟ್ರಾಂಜ್-30 ಕಾರ್ಯಕ್ರಮದಡಿ ಯೋಜನಾ ವೆಚ್ಚ 500 ಲಕ್ಷಗಳು ಇದ್ದು, ಅಂದಾಜು ಮೊತ್ತ 378.70 ಲಕ್ಷ ರೂ.ಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಕಟ್ಟಡ ಕಾಮಗಾರಿ 11 ತಿಂಗಳ ಅವಧಿ ಇದ್ದು, ಇದಕ್ಕೂ ಪೂರ್ವದಲ್ಲಿ ಪೂರ್ಣಗೊಳಿಸುವಂತೆ ನಿರ್ಮಾಣ ಸಂಸ್ಥೆಗೆ ಸೂಚನೆ ನೀಡಿದರು.

    ಒಟ್ಟು 13551 ಚದುರ ಅಡಿಗಳಷ್ಟು ವಿಸ್ತೀರ್ಣ ಹೊಂದಿದ್ದು, ಅದರಲ್ಲಿ ನೆಲಮಹಡಿ 463.41 ಚ.ಮೀ ವಿಸ್ತೀರ್ಣ ಹೊಂದಿದ್ದು, ಮೊದಲನೇ ಮತ್ತು ಎರಡನೇ ಮಹಡಿ 397 ಚ.ಮೀ ವಿಸ್ತರರ್ಣ ಹೊಂದಿದೆ ನೆಲ ಮಹಡಿಯಲ್ಲಿ ವಿಶ್ರಾಂತಿ ಕೊಠಡಿ, ಊಟದ ಕೋಣೆ, ಅಡುಗೆ ಕೋಣೆ, ಮೇಲ್ವಿಚಾರಕರ, ಕಚೇರಿ, ಸ್ನಾನದ ಕೋಣೆಗಳು, ಶೌಚಾಲಯ, ಉಗ್ರಾಣ ಕೊಠಡಿ, ವಿದ್ಯಾರ್ಥಿಗಳ ಕೊಠಡಿಗಳು ಇರುವುದಾಗಿ ಹೇಳಿದರು. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ತಿಳಿಸಿದರು.

    ಕಾರ್ಯಕ್ರಮಲ್ಲಿ ಜಿ.ಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ತಾಲೂಕಾ ಅಧ್ಯಕ್ಷ ಎಸ್.ಎನ್.ರಾಂಪೂರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಆಶಾಪೂರ, ಕರ್ನಾಟಕ ಗೃಹ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರ ವಿಜಯ ಸೇರಿದಂತೆ ದ್ಯಾಮಣ್ಣ ಗಾಳಿ, ನಾಗರಾಜ ಹದ್ಲಿ ಹಾಗೂ ಇತರರು ಉಪಸ್ಥಿತರಿದ್ದರು.

    Share. Facebook Twitter Pinterest LinkedIn WhatsApp Reddit Tumblr Email

    Related Posts

    July 21, 2025 ಬಾಗಲಕೋಟೆ

    ರೈತರ ಉತ್ಪನ್ನಗಳಿಗೆ ಬ್ರ್ಯಾಂಡ್ ಅಗತ್ಯ: ತಿಮ್ಮಾಪೂರ

    July 21, 2025 ಸಣ್ಣ ಸುದ್ದಿಗಳು

    ಕಾರ್ಮಿಕ ಸಚಿವ ಸಂತೋಷ್ ಲಾಡ್ ಜಿಲ್ಲಾ ಪ್ರವಾಸ

    July 21, 2025 ಬಾಗಲಕೋಟೆ

    ಸಮೃದ್ಧಿ ಹೆಚ್ಚಾದಂತೆ ಸಂಸ್ಕೃತಿ ಕ್ಷೀಣಿಸಬಾರದು: ಗೌಡಪ್ಪಗೋಳ

    July 21, 2025 ಬಾಗಲಕೋಟೆ

    ಅಪಪ್ರಚಾರಕ್ಕೆ ಅಭಿವೃದ್ಧಿಯೇ ತಕ್ಕ ಉತ್ತರ: ಮೇಟಿ

    July 21, 2025 ಸಿನೆಮಾ

    ‘ಕಾಂತಾರ ಚಾಪ್ಟರ್ 1’ ಚಿತ್ರೀಕರಣಕ್ಕೆ ತೆರೆ: ಅ.2ಕ್ಕೆ ಬಿಡುಗಡೆ!

    July 19, 2025 ಅರ್ಜಿ ಆಹ್ವಾನ

    ವಾಯುಪಡೆ ಏರ್‌ಮನ್ ನೇಮಕಾತಿಗೆ ಅರ್ಜಿ

    Facebook X (Twitter) Instagram Pinterest
    • Privacy Policy
    © 2025 Sanjedarshan. Developed by Vikimediatec Pvt Ltd.
    ಮಹೇಶ ಅಂಗಡಿ, ಸಂಪಾದಕರು, ಸಂಜೆದರ್ಶನ ದಿನ ಪತ್ರಿಕೆ, ಶಿವಗಿರಿ ಬಡಾವಣೆ 6ನೇ ಕ್ರಾಸ್, ವಿದ್ಯಾಗಿರಿ, ಬಾಗಲಕೋಟೆ-587102. ಮೋ: 9845228092

    Type above and press Enter to search. Press Esc to cancel.