Close Menu
    Facebook X (Twitter) Instagram YouTube
    Facebook YouTube X (Twitter) Instagram
    Sanjedarshan
    Subscribe
    • ಇದೀಗ ಬಂದ ಸುದ್ದಿ
    • ಬಾಗಲಕೋಟೆ
    • ಸಿನೆಮಾ
    • ಸಣ್ಣ ಸುದ್ದಿಗಳು
    • ಅರ್ಜಿ ಆಹ್ವಾನ
    • EPaper
    • ಲೇಖನಗಳು
    Facebook X (Twitter) Instagram
    Sanjedarshan
    Home»ಬಾಗಲಕೋಟೆ»ನಾಳೆ ಆರ್‌ಎಸ್‌ಎಸ್ ಪಥಸಂಚಲನ
    ಬಾಗಲಕೋಟೆ

    ನಾಳೆ ಆರ್‌ಎಸ್‌ಎಸ್ ಪಥಸಂಚಲನ

    ಸಂಜೆ ದರ್ಶನBy ಸಂಜೆ ದರ್ಶನOctober 4, 20252 Mins Read
    ಆರ್‌ಎಸ್‌ಎಸ್

    ಬಾಗಲಕೋಟೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘ 100 ವರ್ಷದ ಸಂಭ್ರಮದೊಂದಿಗೆ ವಿಜಯ ದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ನಾಳೆ ದಿ.5 ರಂದು ನಗರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಬಾಗಲಕೋಟೆ ನಗರವು ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ.

    ನಗರದಲ್ಲಿ ಪಥಸಂಚಲನಕ್ಕೆ ಸಿದ್ದತೆಗಳು ನಡೆದಿದ್ದು, ಪಥಸಂಚಲನ ಹಿನ್ನೆಲೆಯಲ್ಲಿ ಬಸವೇಶ್ವರ ವೃತ್ತ, ಎಂ.ಜಿ.ರೋಡ, ವಲ್ಲಭಬಾಯಿ ಚೌಕ, ಹಳಪೇಟ, ಜೈನಪೇಟ, ಹಳೇ ಮಾರುಕಟ್ಟೆ ರಸ್ತೆ ಸೇರಿದಂತೆ ವಿವಿಧೆಡೆ ಕಟೌಟ ಬ್ಯಾನರಗಳು ರಾರಾಜಿಸುತ್ತಿವೆ. ಬಾಗಲಕೋಟೆ ನಗರವು ಸಂಪೂರ್ಣ ಕೇಸರಿಮಯ ಗೊಂಡಿದ್ದು ವ್ಯಾಪಕ ಪ್ರಮಾಣದಲ್ಲಿ ಜನಾಕರ್ಷಣೆ ಕೇಂದ್ರವಾಗಿದೆ.

    ಈ ಬಾರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಪಥಸಂಚಲನದಲ್ಲಿ ಸುಮಾರು ಮೂರು ಸಾವಿರಕ್ಕಿಂತಲೂ ಹೆಚ್ಚು ಗಣವೇಷಧಾರಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮುಖ್ಯವಾಗಿ ಚಿಕ್ಕಮಕ್ಕಳು ರಾಣಿ ಚೆನ್ನಮ್ಮ, ಸಿಂಧೂರ ಲಕ್ಷ್ಮಣ, ಭಗತ ಸಿಂಗ್, ಶಿವಾಜಿ ಮಹಾರಾಜ ಸೇರಿದಂತೆ ವಿವಿಧ ಗಣ್ಯರ ವೇಷ ಭೂಷಣ ಧರಿಸಿ ಗಮನ ಸೆಳೆಯಲಿದ್ದಾರೆ. ಪುಷ್ಪಿವೃಷ್ಠಿಗಳು ಕಲರವ, ಪಥಸಂಚಲನ ಮಾರ್ಗದಲ್ಲಿ ಬಿಡಿಸುವ ರಂಗೋಲಿ ಹಬ್ಬದ ವಾತಾವರಣ ಸೃಷ್ಠಿ ಮಾಡಲಿದೆ.

    ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸುವ ಸ್ವಯಂ ಸೇವಕರು ಸಮವಸ್ತ್ರ ಖರೀದಿಯಲ್ಲಿ ತೊಡಗಿದ್ದು, ಕಳೆದ ಒಂದು ತಿಂಗಳಿಂದ ಪಥಸಂಚಲನಕ್ಕೆ ಬೇಕಾಗುವ ಸಿದ್ದತೆ ಅಂತಿಮ ಹಂತ ತಲುಪಿದ್ದು, ಘೋಷ ವಾದ್ಯ ತಂಡಗಳು ನಿತ್ಯವು ತಾಲೀಮು ನಡೆಸಿದ್ದಾರೆ.

    ನಾಳೆ ಮಧ್ಯಾಹ್ನ 4 ಗಂಟೆಗೆ ನಗರದ ಬಸವೇಶ್ವರ ಕಾಲೇಜು ಮೈದಾನದಿಂದ ಪಥಸಂಚಲನವು ಎರಡು ಮಾರ್ಗಗಳಲ್ಲಿ ನಗರದಲ್ಲಿ ಸಂಚರಿಸಲಿದ್ದು, ಎರಡು ಪಥಸಂಚಲನವು 4.52 ಕ್ಕೆ ಬಸವೇಶ್ವರ ವೃತ್ತದಲ್ಲಿ ಸೇರಲಿವೆ. ನಂತರ 5.25ಕ್ಕೆ ಬಸವೇಶ್ವರ ಮಹಾವಿದ್ಯಾಲಯದ ಮೈದಾನದಲ್ಲಿ ಸಮಾರಂಭ ಜರುಗಲಿದೆ.

    ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನೀಯರ್‍ಸ್ ಕಾರ್ಯನಿರ್ವಾಹಕ ಸಮಿತಿ ಸದಸ್ಯರು, ಉದ್ಯಮಿಗಳಾದ ವಿಲಾಸ ಡಿ.ಬದಾಮಿ ಅವರು ಆಗಮಿಸಲಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಸಹ ಬೌದ್ಧಿಕ ಪ್ರಮುಖರಾದ ರಾಮಚಂದ್ರ ಏಡಕೆ ಉಪಸ್ಥಿತರಿರುವರು.

    ಪೊಲೀಸ್ ಬಿಗಿ ಬಂದೋಬಸ್ತ್:

    ಎಸ್ಪಿ 1, ಹೆಚ್ಚುವರಿ ಎಸ್ಪಿ 2, ಡಿಎಸ್ಪಿ 7, ಸಿಪಿಐ 15, ಪಿಎಸ್‌ಐ 62, ಎಎಸ್‌ಐ 74, ಹೆಡ್ ಕಾನ್ಸ್ಟೇಬಲ್/ ಕಾನ್ಸ್ಟೇಬಲ್ 602, ಹೋಮ್ ಗಾಡ್ಸ್ 320, ಡಿಎಆರ್ 5, ಕೆಎಸ್‌ಆರ್‌ಪಿ 4, ಯಾವುದೇ ಅಹಿತಕರ ಘಟನೆಗಳು ಆಗದಂತೆ ನೋಡಿಕೊಳ್ಳಲು ಬಿಗಿಭದ್ರತೆಯನ್ನು ಮಾಡಲಾಗಿದೆ.

    Share. WhatsApp Facebook Twitter Pinterest LinkedIn Telegram Reddit Email Copy Link

    Related Posts

    October 10, 2025 ಬಾಗಲಕೋಟೆ

    ಇಂದಿರಾ ಕ್ಯಾಂಟಿನ್ ಬಡವರ ಪಾಲಿಗೆ ವರದಾನ: ಶಾಸಕ ಮೇಟಿ

    October 10, 2025 ಬಾಗಲಕೋಟೆ

    ಬ್ರಾಹ್ಮಣ ಸಮುದಾಯದವರಿಗೆ ಸ್ವಯಂ ಉದ್ಯೋಗಕ್ಕಾಗಿ ಸಾಲ

    October 10, 2025 ಬಾಗಲಕೋಟೆ

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತಿದೆ: ಶಾಂತಗೌಡ ಪಾಟೀಲ

    October 10, 2025 ಬಾಗಲಕೋಟೆ

    ನ್ಯಾಯಾಧೀಶರ ಮೇಲೆ ಶೂ ಎಸೆತ ; ಕಾಂಗ್ರೆಸ್ ಪ್ರತಿಭಟನೆ

    October 9, 2025 ಬಾಗಲಕೋಟೆ

    ಅನುಚಿತ ವರ್ತನೆ ಮಾಡಿರುವ ವಕೀಲನ ಬಂಧನಕ್ಕೆ ಆಗ್ರಹ

    October 9, 2025 ಬಾಗಲಕೋಟೆ

    ಕುರುಬರನ್ನು ಎಸ್ಟಿಗೆ ಸೇರ್ಪಡೆ ಮಾಡಲು ಸಿಎಂ ಕೊಡುಗೆ ಶೂನ್ಯ

    Facebook YouTube X (Twitter) Instagram
    © 2025 Sanjedarshan. Developed by Vikimediatec Pvt Ltd.
    ಮಹೇಶ ಅಂಗಡಿ, ಸಂಪಾದಕರು, ಸಂಜೆದರ್ಶನ ದಿನ ಪತ್ರಿಕೆ, ಶಿವಗಿರಿ ಬಡಾವಣೆ 6ನೇ ಕ್ರಾಸ್, ವಿದ್ಯಾಗಿರಿ, ಬಾಗಲಕೋಟೆ-587102. ಮೋ: 9845228092
    Privacy Policy | Terms and Conditions | Disclaimer | Affiliate Disclosure | About Us | Contact Us

    Type above and press Enter to search. Press Esc to cancel.