Close Menu
    Facebook X (Twitter) Instagram YouTube
    Facebook X (Twitter) Instagram YouTube
    Sanjedarshan
    Subscribe
    • ಇದೀಗ ಬಂದ ಸುದ್ದಿ
    • ಬಾಗಲಕೋಟೆ
    • ಇತರ ಜಿಲ್ಲಾ ಸುದ್ದಿ
    • ಸಿನೆಮಾ
    • ರಾಜ್ಯ
    • ರಾಷ್ಟ್ರೀಯ
    • ಕ್ರೀಡಾ ಸುದ್ದಿ
    • EPaper
    Facebook X (Twitter) Instagram
    Sanjedarshan
    Home»ಸಿನೆಮಾ»‘ಎಲ್ಟು ಮುತ್ತಾ’ ಚಿತ್ರ ಜುಲೈ ಕೊನೆಯ ವಾರದಲ್ಲಿ ಬಿಡುಗಡೆಗೆ
    ಸಿನೆಮಾ

    ‘ಎಲ್ಟು ಮುತ್ತಾ’ ಚಿತ್ರ ಜುಲೈ ಕೊನೆಯ ವಾರದಲ್ಲಿ ಬಿಡುಗಡೆಗೆ

    SanjeBy SanjeJuly 7, 20251 Min Read
    ಎಲ್ಟು ಮುತ್ತಾ

    ಬಾಗಲಕೋಟೆ: ‘ಎಲ್ಟು ಮುತ್ತಾ’ ಕನ್ನಡ ಚಲನಚಿತ್ರವು ಜುಲೈ ಕೊನೆಯ ವಾರದಲ್ಲಿ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಸತ್ಯ ಶ್ರೀನಿವಾಸನ್ ತಿಳಿಸಿದ್ದಾರೆ. ಇಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈ 5 ಸ್ಟುಡಿಯೋ ಮತ್ತು ಎಸಿಎಫ್ 22 ಪ್ರೊಡಕ್ಷನ್ಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ ಎಂದರು.

    ಮಡಿಕೇರಿಯ ಮಣ್ಣಿನ ಕಥೆ ಇದಾಗಿದ್ದು, ಎರಡು ಪಾತ್ರಗಳ ನಡುವೆ ನಡೆಯುವ ಕಥಾಹಂದರವನ್ನು ಚಿತ್ರ ಒಳಗೊಂಡಿದೆ. ನೈಜ ಘಟನೆಯೊಂದನ್ನು ಆಧರಿಸಿ ಈ ಚಿತ್ರವನ್ನು ನಿರೂಪಿಸಲಾಗಿದೆ. ಸಾವಿನ ಮನೆಯಲ್ಲಿ ಡೋಲು ಹೊಡೆಯುವ ಕುಟುಂಬದ ಸುತ್ತ ಕಥೆ ಸಾಗುತ್ತದೆ. ‘ಮುತ್ತಾ’ನ ಕಥೆಯನ್ನು ನಿರೂಪಿಸುವ ‘ಎಲ್ಟು’ ಪಾತ್ರದಲ್ಲಿ ನಿರ್ದೇಶಕ ಸೂರ್ಯ ಅವರೇ ಕಾಣಿಸಿಕೊಂಡಿದ್ದಾರೆ. ಶೌರ್ಯಪ್ರತಾಪ್ ‘ಮುತ್ತಾ’ನ ಪಾತ್ರದಲ್ಲಿ ನಟಿಸಿದ್ದಾರೆ.

    ಕಡಿಮೆ ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಿಸಲಾಗಿದ್ದು, ಎಲ್ಲರಿಗೂ ಮನಮುಟ್ಟುವಂತೆ ಹೆಣೆಯಲಾಗಿದೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ರಾಜ್ಯಾದ್ಯಂತ ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಲು ಸಿದ್ಧವಾಗಿದೆ.

    ನಿರ್ದೇಶಕ ಸೂರ್ಯ ಮಾತನಾಡಿ, ಈ ಚಿತ್ರ ನನ್ನ ಮೊದಲ ನಿರ್ದೇಶನವಾಗಿದೆ. ಮಡಿಕೇರಿ ಸುತ್ತಮುತ್ತ ಬಹುತೇಕ ಚಿತ್ರೀಕರಣವಾಗಿದ್ದು, ಕನಕಪುರದಲ್ಲಿಯೂ ಸಹ ಚಿತ್ರೀಕರಣ ನಡೆದಿದೆ ಎಂದರು.

    ಈಗಾಗಲೇ ಹುಬ್ಬಳ್ಳಿಯಲ್ಲಿ ಆಡಿಯೋ ಬಿಡುಗಡೆ ಮಾಡಲಾಗಿದ್ದು, ‘ಎಲ್ಟು ಮುತ್ತಾ’ ಚಿತ್ರದಲ್ಲಿ ಯುವ ನಟ-ನಟಿಯರು ನಟಿಸಿದ್ದಾರೆ. ಇನ್ನೊಬ್ಬ ನಾಯಕ ಶೌರ್ಯಪ್ರತಾಪ್ ಮಾತನಾಡಿ, “ನಾನು ಈ ಚಿತ್ರದಲ್ಲಿ ನಟ, ಸಹಾಯಕ ನಿರ್ದೇಶಕ ಹಾಗೂ ಬರಹಗಾರನಾಗಿ ಕೆಲಸ ಮಾಡಿದ್ದೇನೆ” ಎಂದು ತಿಳಿಸಿದರು.

    ಸಂಗೀತ ನಿರ್ದೇಶಕ ಪ್ರಸನ್ ಕೇಶವ್ ಚಿತ್ರದ ಐದು ಹಾಡುಗಳ ಜೊತೆಗೆ ಹಿನ್ನೆಲೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಮೇಯಪ್ಪ ಭಾಸ್ಕರ್ ಛಾಯಾಗ್ರಹಣ ನೀಡಿದ್ದು, ರೋಹನ್ ಆರ್ಯ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಪ್ರಿಯಾಂಕಾ ಮಲಾಲಿ ನಾಯಕಿಯಾಗಿ ನಟಿಸಿದ್ದಾರೆ.

    Share. Facebook Twitter Pinterest LinkedIn WhatsApp Reddit Tumblr Email

    Related Posts

    July 7, 2025 ಅರ್ಜಿ ಆಹ್ವಾನ

    ಜು.9 ರಂದು ಖಾಲಿ ಹುದ್ದೆಗಳಿಗೆ ನೇರ ಸಂದರ್ಶನ

    July 5, 2025 ಬಾಗಲಕೋಟೆ

    ನಾಳೆ ಪ್ರತಿಭಾ ಪುರಸ್ಕಾರ- ಸಾಧಕರಿಗೆ ಸನ್ಮಾನ

    July 5, 2025 ಅರ್ಜಿ ಆಹ್ವಾನ

    ಕ.ರಾ.ಮು.ವಿ. ಪ್ರಥಮ ವರ್ಷದ ಪ್ರವೇಶಾತಿ ಪ್ರಾರಂಭ

    July 5, 2025 ಅರ್ಜಿ ಆಹ್ವಾನ

    ಅಲ್ಪಸಂಖ್ಯಾತ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ

    July 4, 2025 ಸಿನೆಮಾ

    ‘ರಾಮಾಯಣ’ ಚಿತ್ರದ Introduction ವಿಡಿಯೋ ಬಿಡುಗಡೆ

    July 4, 2025 ಬಾಗಲಕೋಟೆ

    ಸಕ್ರಿ ಪದವಿ ಪೂರ್ವ ಕಾಲೇಜಿನಲ್ಲಿ ವೈದ್ಯರ ದಿನಾಚರಣೆ

    Facebook X (Twitter) Instagram Pinterest
    • Privacy Policy
    © 2025 Sanjedarshan. Developed by Vikimediatec Pvt Ltd.
    ಮಹೇಶ ಅಂಗಡಿ , ಸಂಪಾದಕರು, ಸಂಜೆದರ್ಶನ ದಿನ ಪತ್ರಿಕೆ, ಶಿವಗಿರಿ ಬಡಾವಣೆ 6ನೇ ಕ್ರಾಸ್, ವಿದ್ಯಾಗಿರಿ, ಬಾಗಲಕೋಟೆ-587102. ಮೋ: 9845228092

    Type above and press Enter to search. Press Esc to cancel.