Close Menu
    Facebook X (Twitter) Instagram YouTube
    Facebook YouTube X (Twitter) Instagram
    Sanjedarshan
    Subscribe
    • ಇದೀಗ ಬಂದ ಸುದ್ದಿ
    • ಬಾಗಲಕೋಟೆ
    • ಸಿನೆಮಾ
    • ಸಣ್ಣ ಸುದ್ದಿಗಳು
    • ಅರ್ಜಿ ಆಹ್ವಾನ
    • EPaper
    • ಲೇಖನಗಳು
    Facebook X (Twitter) Instagram
    Sanjedarshan
    Home»ಸಿನೆಮಾ»‘ಅವತಾರ್: ಫೈರ್ ಅಂಡ್ ಆಶ್’ ಚಿತ್ರದ ಟ್ರೈಲರ್ ಬಿಡುಗಡೆ
    ಸಿನೆಮಾ

    ‘ಅವತಾರ್: ಫೈರ್ ಅಂಡ್ ಆಶ್’ ಚಿತ್ರದ ಟ್ರೈಲರ್ ಬಿಡುಗಡೆ

    ಸಂಜೆ ದರ್ಶನBy ಸಂಜೆ ದರ್ಶನJuly 29, 20251 Min Read
    ಅವತಾರ್: ಫೈರ್ ಅಂಡ್ ಆಶ್

    ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಬಹುನಿರೀಕ್ಷಿತ ‘ಅವತಾರ್: ಫೈರ್ ಅಂಡ್ ಆಶ್’ ಚಿತ್ರದ ಟ್ರೈಲರ್ ಜುಲೈ 28 ರಂದು ಬಿಡುಗಡೆಯಾಗಿದ್ದು, ಸಿನಿಮಾ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ. ‘ಅವತಾರ್’ ಮತ್ತು ‘ಅವತಾರ್: ದಿ ವೇ ಆಫ್ ವಾಟರ್’ ಸಿನಿಮಾಗಳ ಮುಂದುವರಿದ ಭಾಗವಾಗಿರುವ ಈ ಚಿತ್ರವನ್ನು 20th ಸೆಂಚುರಿ ಸ್ಟುಡಿಯೋಸ್ ನಿರ್ಮಿಸಿ ವಿತರಿಸುತ್ತಿದೆ.

    ಸ್ಯಾಮ್ ವರ್ತಿಂಗ್‌ಟನ್, ಝೋ ಸಲ್ಡಾನಾ, ಸಿಗೋರ್ನಿ ವೀವರ್, ಸ್ಟೀಫನ್ ಲ್ಯಾಂಗ್, ಜಿಯೋವಾನಿ ರಿಬಿಸಿ, ಕೇಟ್ ವಿನ್ಸ್‌ಲೆಟ್, ಡೇವಿಡ್ ಥೆವ್ಲಿಸ್, ಊನಾ ಚಾಪ್ಲಿನ್ ಸೇರಿದಂತೆ ಮೊದಲ ಭಾಗದ ತಾರಾಗಣದ ಜೊತೆಗೆ ಹೊಸ ಕಲಾವಿದರು ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಮೊದಲ ಭಾಗ ‘ಅವತಾರ್’ ಡಿಸೆಂಬರ್ 2009 ರಂದು ಬಿಡುಗಡೆಯಾಗಿ ಐತಿಹಾಸಿಕ ಯಶಸ್ಸು ಗಳಿಸಿತ್ತು. ಎರಡನೆಯ ಭಾಗ ‘ಅವತಾರ್: ದಿ ವೇ ಆಫ್ ವಾಟರ್’ ಸಹ ಡಿಸೆಂಬರ್ 2022 ರಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತ್ತು.

    ‘ಅವತಾರ್: ಫೈರ್ ಅಂಡ್ ಆಶ್’ ಚಿತ್ರವು ಡಿಸೆಂಬರ್ 19, 2025 ರಂದು ತೆರೆ ಕಾಣಲು ಸಜ್ಜಾಗಿದೆ. ಚಿತ್ರದ ಬರವಣಿಗೆ, ಪೂರ್ವ-ನಿರ್ಮಾಣ ಮತ್ತು ವಿಝುಯಲ್ ಎಫೆಕ್ಟ್ಸ್‌ಗೆ ಹೆಚ್ಚಿನ ಸಮಯ ತೆಗೆದುಕೊಂಡ ಕಾರಣ ಈ ಚಿತ್ರದ ಬಿಡುಗಡೆ ದಿನಾಂಕ ಒಂಬತ್ತು ಬಾರಿ ಮುಂದೂಡಲ್ಪಟ್ಟಿತ್ತು. ಜೇಮ್ಸ್ ಕ್ಯಾಮರೂನ್ ಜೊತೆಗೆ ರಿಕ್ ಜಾಫಾ, ಅಮಂಡಾ ಸಿಲ್ವರ್, ಜೋಶ್ ಫ್ರೀಡ್‌ಮನ್ ಮತ್ತು ಶೇನ್ ಸಲೆರ್ನೊ ಚಿತ್ರಕಥೆಯನ್ನು ಬರೆದಿದ್ದಾರೆ.

    ಅವತಾರ್: ಫೈರ್ ಅಂಡ್ ಆಶ್
    Share. WhatsApp Facebook Twitter Pinterest LinkedIn Telegram Reddit Email Copy Link

    Related Posts

    October 10, 2025 ಬಾಗಲಕೋಟೆ

    ಇಂದಿರಾ ಕ್ಯಾಂಟಿನ್ ಬಡವರ ಪಾಲಿಗೆ ವರದಾನ: ಶಾಸಕ ಮೇಟಿ

    October 10, 2025 ಬಾಗಲಕೋಟೆ

    ಬ್ರಾಹ್ಮಣ ಸಮುದಾಯದವರಿಗೆ ಸ್ವಯಂ ಉದ್ಯೋಗಕ್ಕಾಗಿ ಸಾಲ

    October 10, 2025 ಬಾಗಲಕೋಟೆ

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತಿದೆ: ಶಾಂತಗೌಡ ಪಾಟೀಲ

    October 10, 2025 ಬಾಗಲಕೋಟೆ

    ನ್ಯಾಯಾಧೀಶರ ಮೇಲೆ ಶೂ ಎಸೆತ ; ಕಾಂಗ್ರೆಸ್ ಪ್ರತಿಭಟನೆ

    October 9, 2025 ಬಾಗಲಕೋಟೆ

    ಅನುಚಿತ ವರ್ತನೆ ಮಾಡಿರುವ ವಕೀಲನ ಬಂಧನಕ್ಕೆ ಆಗ್ರಹ

    October 9, 2025 ಬಾಗಲಕೋಟೆ

    ಕುರುಬರನ್ನು ಎಸ್ಟಿಗೆ ಸೇರ್ಪಡೆ ಮಾಡಲು ಸಿಎಂ ಕೊಡುಗೆ ಶೂನ್ಯ

    Facebook YouTube X (Twitter) Instagram
    © 2025 Sanjedarshan. Developed by Vikimediatec Pvt Ltd.
    ಮಹೇಶ ಅಂಗಡಿ, ಸಂಪಾದಕರು, ಸಂಜೆದರ್ಶನ ದಿನ ಪತ್ರಿಕೆ, ಶಿವಗಿರಿ ಬಡಾವಣೆ 6ನೇ ಕ್ರಾಸ್, ವಿದ್ಯಾಗಿರಿ, ಬಾಗಲಕೋಟೆ-587102. ಮೋ: 9845228092
    Privacy Policy | Terms and Conditions | Disclaimer | Affiliate Disclosure | About Us | Contact Us

    Type above and press Enter to search. Press Esc to cancel.