Close Menu
    Facebook X (Twitter) Instagram YouTube
    Facebook X (Twitter) Instagram YouTube
    Sanjedarshan
    Subscribe
    • ಇದೀಗ ಬಂದ ಸುದ್ದಿ
    • ಬಾಗಲಕೋಟೆ
    • ಇತರ ಜಿಲ್ಲಾ ಸುದ್ದಿ
    • ಸಿನೆಮಾ
    • ರಾಜ್ಯ
    • ರಾಷ್ಟ್ರೀಯ
    • ಕ್ರೀಡಾ ಸುದ್ದಿ
    • EPaper
    Facebook X (Twitter) Instagram
    Sanjedarshan
    Home»ಕ್ರೀಡಾ ಸುದ್ದಿ»16 ಚಿನ್ನದ ಪದಕ ಪಡೆದ ಅಮೂಲ್ಯ
    ಕ್ರೀಡಾ ಸುದ್ದಿ

    16 ಚಿನ್ನದ ಪದಕ ಪಡೆದ ಅಮೂಲ್ಯ

    SanjeBy SanjeSeptember 30, 20242 Mins Read

    ಬಾಗಲಕೋಟೆ: ತೋಟಗಾರಿಕೆ ವಿವಿಯಲ್ಲಿ ಸೋಮವಾರ ನಡೆದ 13ನೇ ಘಟಿಕೋತ್ಸವದಲ್ಲಿ ಬೀದರನ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಮಗಳಾದ ಅಮೂಲ್ಯ ಪಾಟೀಲಗೆ ಬಿ.ಎಸ್.ಸಿ ಪದವಿಯಲ್ಲಿ 16 ಚಿನ್ನದ ಪಕದ ಲಭಿಸಿದ್ದು, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಚಿನ್ನದ ಪದಕಗಳನ್ನು ಪ್ರಧಾನ ಮಾಡಿದರು.

    ಚಿನ್ನದ ಪದಕ ಪಡೆದ ಅಮೂಲ್ಯ ಅವರು ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ.ಸಂಗಪ್ಪ ಪಾಟೀಲ ಅವರ ಹಿರಿಯ ಮಗಳಾಗಿದ್ದು, ತಾಯಿ ಬೀದರ ಜಿಲ್ಲೆ ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾದ್ಯಾಪಕರಾಗಿದ್ದಾರೆ. ನಿರ್ಮಲಾ ಹುಬ್ಬಳ್ಳಿಯ ಠಕ್ಕರ್ ಪ್ರೌಢಶಾಲೆಯಲ್ಲಿ 10ನೇ ತರಗತಿವರೆಗೆ, ಪಿಯುಸಿ ತರಗತಿಯನ್ನು ಬೆಂಗಳೂರಿನ ಎಂಇಎಸ್ ಪ್ರೊ.ಸುಬ್ಬರಾವ್ ಪಿಯು ಮಹಾವಿದ್ಯಾಲಯದಲ್ಲಿ ಕಲಿತಿದ್ದು, ಸ್ನಾತಕ ತೋಟಗಾರಿಕೆ ಪದವಿಯನ್ನು ಬೀದರನಲ್ಲಿ ವಿದ್ಯಾಬ್ಯಾಸ ಮಾಡಿದ್ದಾರೆ.

    ಬಿಎಸ್‍ಸಿ ಪದವಿಯ ವಿವಿಧ ವಿಭಾಗದಲ್ಲಿ ಒಟ್ಟು 16 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ತಂದೆ-ತಾಯಿಯರ ಪ್ರೋತ್ಸಾಹ, ಓದಿಲ್ಲದೇ ಜೀವನವಿಲ್ಲ. ಓದಿದರೆ ಮಾತ್ರ ಮುಂದೆ ಬರಲು ಸಾಧ್ಯವೆಂಬುದನ್ನು ತಿಳಿದಿರುವುದಾಗಿ ಅಮೂಲ್ಯ ಹೇಳುತ್ತಾರೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಪರಿಶ್ರಮ ಮುಖ್ಯವಾಗಿದೆ. ನನ್ನ ತಂಗಿ ಮತ್ತು ಅಜ್ಜ-ಅಜ್ಜಿಯರು ನನಗೆ ಸ್ಪೂರ್ತಿಯಾಗಿದ್ದರು. ಮುಂದೆ ಎಂ.ಎಸ್.ಸಿಯಲ್ಲಿ ಸ್ನಾತಕೋತ್ತರ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

    ಬಿಎಸ್‍ಸಿ ಆಹಾರ ತಂತ್ರಜ್ಞಾನದಲ್ಲಿ ಸ್ಮಿತಾ ಎನ್ 5 ಚಿನ್ನದ ಪದಕ ಪಡೆದರೆ, ಗಾಯತ್ರಿ ಎಸ್.ಆರ್ 4, ಅನಿನ್ ಕುಮಾರ ಆರ್ ಮತ್ತು ಗಗನ್‍ಗೌಡ ಎಂ.ಬಿ ತಲಾ 3, ಸಂತೋಷ ಕಾಚಿ ಮತ್ತು ಗೋವಿಂದ ಕುಮಾರ ತಲಾ 2, ಯಾಸ್‍ಮಿನ್ ಪಿ.ಪಿ, ವಿದ್ಯಾಶ್ರೀ ಗುಂಡಾಳೆ, ಅಶ್ವಥಿ ಸುರೇಶ, ಚಿನ್ಮಯ ಅರುಣ್ ಕೋಪರ್ಡೆ, ಜ್ಯೋತಿ ಜಗ್ಗಲ, ಕೃಷ್ಣಾ ಹೂಗಾರ, ಚಂದ್ರುಶ್ರೀ ಎಸ್, ಅಂಜೀನಯ್ಯ, ಪ್ರವೀಣ ರಾಚೋಳಿ, ತೇಜ ಸಿ.ಆರ್, ಅನನ್ಯ ಎಸ್.ಎಸ್, ಪ್ರಿಯಾಂಕ ಪಿ, ಲಾವಣ್ಯ ಎಸ್.ಎನ್. ಹಾಗೂ ಪ್ರತ್ಯಕ್ಷ ಮೊಗ್ರ ತಲಾ ಒಂದು ಚಿನ್ನದ ಪದಕ ಪಡೆದುಕೊಂಡರು.

    ಪಿ.ಎಚ್.ಡಿ ಪದವಿಯಲ್ಲಿ ಅಂಜಲಿ ವಿ.ಎ 4 ಚಿನ್ನದ ಪಡೆದುಕೊಂಡರೆ, ಇಂಪ ಎಚ್.ಆರ್ ಮತ್ತು ಬಸವರಾಜ ಪಡಶೆಟ್ಟಿ ತಲಾ 2 ಹಾಗೂ ಗೌತಮ ವೈ ಮತ್ತು ಸನ್ನತಿ ನಾಯಕ ತಲಾ ಒಂದು ಚಿನ್ನದ ಪದಕ ಪಡೆದರು. ಎಂ.ಎಸ್.ಸ್ಸಿ ತೋಟಗಾರಿಕೆಯಲ್ಲಿ ತಾನ್ಯ ಗೌಡ ಮತ್ತು ಸೋನಿಕಾ ಎ.ಎಸ್ 4 ಚಿನ್ನದ ಪದಕ ಪಡೆದುಕೊಂಡರೆ, ಸಿಂಚನ ಎ.ಎಚ್ 3 ಪದಕ, ಕೀರ್ತನ ವಿ, ಭೂಮಿಕ ವೈ.ಪಿ ಕಿಶೋರ ಕುಮಾರ ತಲಾ 2, ಮೇಘನ ಎಸ್, ಅಕ್ಷತಾ ಕೊಪ್ಪದ, ಲಕ್ಷ್ಮೀ ಗಂಗಲ್, ರಾಜಶ್ರೀ ತಲಾ 1 ಚಿನ್ನದ ಪದಕಗಳನ್ನು ಪಡೆದುಕೊಂಡರು.

    Share. Facebook Twitter Pinterest LinkedIn WhatsApp Reddit Tumblr Email

    Related Posts

    May 19, 2025 ಕ್ರೀಡಾ ಸುದ್ದಿ

    ಬಾಗಲಕೋಟೆ ಲಯನ್ ಪ್ರೆಸ್ ಟೀಂಗೆ ಚಾಂಪಿಯನ್ ಟ್ರೋಪಿ

    December 2, 2024 ಇದೀಗ ಬಂದ ಸುದ್ದಿ

    ಸ್ಪೂರ್ತಿದಾಯಕವಾದ ಕ್ರೀಡೆಗಳು ಬದುಕಿಗೆ ಅವಶ್ಯ : ಡಿಸಿ ಜಾನಕಿ

    December 22, 2023 ಕ್ರೀಡಾ ಸುದ್ದಿ

    ಉತ್ಸಾಹ ಜೀವನಕ್ಕೆ ಕ್ರೀಡೆ ಅವಶ್ಯ : ನ್ಯಾ.ವಿಜಯ ನೇರಳೆ

    Facebook X (Twitter) Instagram Pinterest
    • Privacy Policy
    © 2025 Sanjedarshan. Developed by Vikimediatec Pvt Ltd.
    ಮಹೇಶ ಅಂಗಡಿ , ಸಂಪಾದಕರು, ಸಂಜೆದರ್ಶನ ದಿನ ಪತ್ರಿಕೆ, ಶಿವಗಿರಿ ಬಡಾವಣೆ 6ನೇ ಕ್ರಾಸ್, ವಿದ್ಯಾಗಿರಿ, ಬಾಗಲಕೋಟೆ-587102. ಮೋ: 9845228092

    Type above and press Enter to search. Press Esc to cancel.