Close Menu
    Facebook X (Twitter) Instagram YouTube
    Facebook X (Twitter) Instagram YouTube
    Sanjedarshan
    Subscribe
    • ಇದೀಗ ಬಂದ ಸುದ್ದಿ
    • ಬಾಗಲಕೋಟೆ
    • ಸಿನೆಮಾ
    • EPaper
    • ಅರ್ಜಿ ಆಹ್ವಾನ
    • ಲೇಖನಗಳು
    Facebook X (Twitter) Instagram
    Sanjedarshan
    Home»ಬಾಗಲಕೋಟೆ»ಜು. 27 ರಂದು ಬಣಜಿಗ ಸಮಾವೇಶ
    ಬಾಗಲಕೋಟೆ

    ಜು. 27 ರಂದು ಬಣಜಿಗ ಸಮಾವೇಶ

    SanjeBy SanjeJuly 19, 20252 Mins Read
    ಬಣಜಿಗ ಸಮಾವೇಶ

    ಬಾದಾಮಿ: ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ (ರಿ)ದ ತಾಲೂಕಾ ಘಟಕದ ವತಿಯಿಂದ ಜು. 27 ರಂದು ರವಿವಾರ ಬೆಳಿಗ್ಗೆ 10.30 ಗಂಟೆಗೆ ಎಸ್.ವ್ಹಿ.ಪಿ.ಸಂಸ್ಥೆಯ ಬಸವಭವನದಲ್ಲಿ ಬಣಜಿಗ ಸಮಾಜದ ತಾಲೂಕಾ ಸಮಾವೇಶ ಹಾಗೂ ನಗರ ಘಟಕ ಉದ್ಘಾಟನಾ ಸಮಾರಂಭ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಣಜಗ ಸಮಾಜದ ತಾಲೂಕಾ ಅಧ್ಯಕ್ಷ ಡಾ.ಅವಿನಾಶ ಮಮದಾಪೂರ ತಿಳಿಸಿದರು.

    ಅವರು ಶನಿವಾರ ನಗರದ ಶ್ರೀ ವೀರಪುಲಿಕೇಶಿ ಸಂಸ್ಥೆಯ ಆಡಳಿತ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದರು. ಶ್ರೀ ಮ.ನಿ.ಪ್ರ. ಶಂಕರಾರೂಢ ಸ್ವಾಮಿಗಳು ಹಾಗೂ ಶ್ರೀ ರಾಮಾರೂಢ ಮಠ, ಶಿರೋಳ ಇವರು ಸಾನಿಧ್ಯ ವಹಿಸುವರು. ತಾಲೂಕಾ ಬಣಜಿಗ ಸಮಾಜದ ಅಧ್ಯಕ್ಷ ಡಾ. ಅವಿನಾಶ ಜೆ. ಮಮದಾಪೂರ ಅಧ್ಯಕ್ಷತೆ ವಹಿಸುವರು. ವೀರಪು ಲಿಕೇಶಿ ಸಂಸ್ಥೆಯ ಚೇರಮನ್ ಎ.ಸಿ. ಪಟ್ಟಣದ ಉದ್ಘಾಟಿಸುವರು. ಬಾದಾಮಿ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಸಂಸ್ಥೆಯ ನಿರ್ದೇಶಕ ಜಯದೇವ ಎಸ್. ಮಮದಾಪೂರ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಜಿ. ಮಮದಾಪೂರ, ತಾಲೂಕಾ ಬಣಜಿಗ ಸಮಾಜದ ಗೌರವಾಧ್ಯಕ್ಷ ಸಿದ್ದಣ್ಣ ಆರ್. ಟೆಂಗಿನಕಾಯಿ, ಕೆರೂರ ಘಟಕದ ಬಣಜಿಗ ಸಮಾಜದ ಅಧ್ಯಕ್ಷ ಚನಮಲ್ಲಪ್ಪ ಎಂ. ಘಟ್ಟದ ಆಗಮಿಸುವರು.

    ಕಾರ್ಯಕ್ರಮಕ್ಕೆ ತಾಲೂಕಿನ ಗ್ರಾಮೀಣ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಸದಸ್ಯ ನಾಗರಾಜ ಕಾಚೆಟ್ಟಿ, ಮುತ್ತಣ್ಣ ಚಿನಿವಾಲರ, ಅಪ್ಪಣ್ಣ ಪಟ್ಟಣದ, ಸಂಜು ಬರಗುಂಡಿ, ನಾಗರಾಜ ಕಡಗದ, ಎಸ್.ಬಿ.ಕಲಹಾಳ, ಬಸವರಾಜ ಟೆಂಗಿನಕಾಯಿ, ಹೊ ಬಸಪ್ಪ ಲೋಕಾಪೂರ, ಚಂದ್ರು ಕಾಚೆಟ್ಟಿ, ಸತೀಶ ಹಂಜಿ, ಚನ್ನಪ್ಪ ಪಟ್ಟಣದ, ಶಿವು ಗೋಕಾಕ, ಮುದಕಪ್ಪ ಮಣ್ಣೂರ, ಅಶೋಕ ಜವಳಿ ಹಾಜರಿದ್ದರು.

    ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

    ಬಾದಾಮಿ ತಾಲೂಕಿನ ಬಣಜಿಗ ಸಮಾಜದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಕೆರೂರ-ಬಿ.ಸಿ.ಪ್ಯಾಟಿ ಮೊ: 9481880848, ಬಾದಾಮಿ-ಎಸ್.ಕೆ. ಜವಳಗದ್ದಿ ಮೊ: 9449436618, ವ್ಹಿ.ಎಸ್. ಶೆಟ್ಟರ ಮೊ: 9448686025 ಬೇಲೂರ- ಸಾಗರ ಹರ್ತಿ ಮೊ: 8105450493, ಕುಳಗೇರಿ ಕ್ರಾಸ್- ಬಸವ ರಾಜ ಶೆಟ್ಟರ ಮೊ: 9845449182 ಸಂಪರ್ಕಿಸಿ ಹೆಸರು ನೋಂದಾಯಿಸಬೇಕು ಎಂದು ಡಾ. ಅವಿನಾಶ ಮಮದಾಪೂ ರಮನವಿಮಾಡಿದರು.

    Share. Facebook Twitter Pinterest LinkedIn WhatsApp Reddit Tumblr Email

    Related Posts

    July 19, 2025 ಅರ್ಜಿ ಆಹ್ವಾನ

    ವಾಯುಪಡೆ ಏರ್‌ಮನ್ ನೇಮಕಾತಿಗೆ ಅರ್ಜಿ

    July 19, 2025 ಬಾಗಲಕೋಟೆ

    ಕಳ್ಳಸಂತೆಯಲ್ಲಿ ಆಹಾರಧಾನ್ಯ ಮಾರಾಟವಾದಲ್ಲಿ ಶಿಸ್ತುಕ್ರಮ: ತಿಮ್ಮಾಪೂರ

    July 19, 2025 ಸಣ್ಣ ಸುದ್ದಿಗಳು

    ಜು. 20 ರಂದು ಬೆನಕಟ್ಟಿಯಲ್ಲಿ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ

    July 19, 2025 ಕ್ರೈಂ ನ್ಯೂಸ್

    ರೋಗಿ ಕರೆತಂದ ಕಾರುಚಾಲಕ ಹೃದಯಾಘಾತಕ್ಕೆ ಬಲಿ

    July 19, 2025 ಬಾಗಲಕೋಟೆ

    ಸಂತಾನಹರಣ ಶಸ್ತ್ರ ಚಿಕಿತ್ಸೆಯಲ್ಲಿ ತಾರತಮ್ಯ ಬೇಡ

    July 19, 2025 ಬಾಗಲಕೋಟೆ

    ಶ್ರೀಗಳ ಆರೋಗ್ಯದಲ್ಲಿ ದಿಢೀರ್ ಏರುಪೇರು

    Facebook X (Twitter) Instagram Pinterest
    • Privacy Policy
    © 2025 Sanjedarshan. Developed by Vikimediatec Pvt Ltd.
    ಮಹೇಶ ಅಂಗಡಿ, ಸಂಪಾದಕರು, ಸಂಜೆದರ್ಶನ ದಿನ ಪತ್ರಿಕೆ, ಶಿವಗಿರಿ ಬಡಾವಣೆ 6ನೇ ಕ್ರಾಸ್, ವಿದ್ಯಾಗಿರಿ, ಬಾಗಲಕೋಟೆ-587102. ಮೋ: 9845228092

    Type above and press Enter to search. Press Esc to cancel.