Close Menu
    Facebook X (Twitter) Instagram YouTube
    Facebook X (Twitter) Instagram YouTube
    Sanjedarshan
    Subscribe
    • ಇದೀಗ ಬಂದ ಸುದ್ದಿ
    • ಬಾಗಲಕೋಟೆ
    • ಇತರ ಜಿಲ್ಲಾ ಸುದ್ದಿ
    • ಸಿನೆಮಾ
    • ರಾಜ್ಯ
    • ರಾಷ್ಟ್ರೀಯ
    • ಕ್ರೀಡಾ ಸುದ್ದಿ
    • EPaper
    Facebook X (Twitter) Instagram
    Sanjedarshan
    Home»ಬಾಗಲಕೋಟೆ»ಸಕ್ರಿ ಪದವಿ ಪೂರ್ವ ಕಾಲೇಜಿನಲ್ಲಿ ವೈದ್ಯರ ದಿನಾಚರಣೆ
    ಬಾಗಲಕೋಟೆ

    ಸಕ್ರಿ ಪದವಿ ಪೂರ್ವ ಕಾಲೇಜಿನಲ್ಲಿ ವೈದ್ಯರ ದಿನಾಚರಣೆ

    SanjeBy SanjeJuly 4, 20251 Min Read
    ವೈದ್ಯರ ದಿನ

    ಬಾಗಲಕೋಟೆ: ವೈದ್ಯ ವೃತ್ತಿ ಅತ್ಯಂತ ಮಹತ್ವವುಳ್ಳದ್ದು “ವೈದ್ಯೋ ನಾರಾಯಣ ಹರಿ” ವೈದ್ಯರನ್ನು ನಾರಾಯಣನಿಗೆ ಹೋಲಿಸಿದ್ದಾರೆ. ಹಾಗಾಗಿ ಜನರು ನಮ್ಮ ಮೇಲಿಟ್ಟಿರುವ ನಂಬಿಕೆ ಯನ್ನು ನಾವು ಉಳಿಸಿಕೊಳ್ಳಬೇಕು ಎಂದು ಡಾ. ಬಿ. ಹೆಚ್. ಕೆರೂಡಿ ಹೇಳಿದರು.

    ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್ ಡಿ ಹೆರಂಜಲ್ ಕಲಾ, ಎಸ್ ಸಕ್ರಿ ವಾಣಿಜ್ಯ ಹಾಗೂ ಆರ್ ದೊಡ್ಡಿಹಾಳ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ವೈದ್ಯರ ದಿನ, ಪತ್ರಕರ್ತರ ದಿನ ಹಾಗೂ ಲೆಕ್ಕ ಪರಿಶೋಧಕರ ದಿನಾಚರಣೆ ಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

    ಭಾರತದಲ್ಲಿ ೧೯೯೧ರಲ್ಲಿ ಈ ದಿನ ಪ್ರಾರಂಭವಾ ಯಿತು. ಶ್ರೇಷ್ಠ ವೈದ್ಯರು ಶಿಕ್ಷಣ ಪ್ರೇಮಿಗಳು, ರಾಜಕಾರಣಿಗಳೂ ಆದ ಬಿಧನೆ ಚಂದ್ರ ರಾಯ್ ಅವರ ಸವಿನೆನಪಿಗೆ ಈ ದಿನ ಆಚರಿಸಲಾಗುತ್ತದೆ. ಬಿ.ಸಿ.ರಾಯ್ ಅವರಿಗೆ ೧೯೬೧ರಲ್ಲಿ “ಭಾರತ ರತ್ನ” ನೀಡಿ ಗೌರವಿಸಲಾಗಿದೆ. ಅದು ಅವರ ಕರ್ತವ್ಯ ಪ್ರಜ್ಞೆಗೆ ಸಂದ ಗೌರವವೆಂದರು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ ಎಚ್ ಎಫ್ ಯೋಗಪ್ಪನವರ ಅವರು, ವೈದ್ಯರಾದವರು ಸಮಯ ಪ್ರಜ್ಞೆ ಹಾಗೂ ಕರ್ತವ್ಯ ಪ್ರಜ್ಞೆ ಉಳ್ಳವರಾಗಿರಬೇಕು. ಕೇವಲ ಹಣ ಮಾಡಲೆಂದು ಈ ವೃತ್ತಿಗೆ ಬಂದರೆ ರೋಗಿಗಳಿಗೆ ದ್ರೋಹ ಮಾಡಿದಂತೆ ಪ್ರಮಾಣಿಕತೆ ಮತ್ತು ತ್ಯಾಗ ಈ ವೃತ್ತಿಯ ಧರ್ಮ ಅದನ್ನು ಕಾಪಾಡಬೇಕು ಎಂದರು.

    ವಿ ಪ್ರ ಮಂಡಳದ ಕಾರ್ಯಧ್ಯಕ್ಷರಾದ ಶ್ರೀಮತಿ ಶ್ರೀಲತಾ ಹೆರಂಜಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಡಾ. ಸುಭಾಸ ಪಾಟೀಲ, ಆನಂದ ದಲಬಂಜನ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ಕಾರ್ಯಕ್ರಮ ದಲ್ಲಿ ಸುಮಾರು ೧೫ ಜನ ಖ್ಯಾತ ವೈದ್ಯರನ್ನು, ೩ ಜನ ಪತ್ರಕರ್ತರನ್ನು ಹಾಗೂ ಲೆಕ್ಕ ಪರಿಶೋದಕರನ್ನು ಸನ್ಮಾನಿಸಲಾಯಿತು. ಪದವಿ ಕಾಲೇಜಿನ ಪ್ರಾಚಾರ್ಯರಾದ ಶ್ರೀನಿವಾಸ ನರಗುಂದ ಸ್ವಾಗತಿಸಿದರು. ವಿ ಪ್ರ ಮಂಡಳದ ಗೌರವ ಕಾರ್ಯದರ್ಶಿಗಳಾದ ಡಾ. ಗಿರೀಶ ಮಾಸೂರಕರ ಅವರು ವಂದಿಸಿದರು. ವಿದ್ಯಾ ಪ್ರಸಾರಕ ಮಂಡಳದ ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    Share. Facebook Twitter Pinterest LinkedIn WhatsApp Reddit Tumblr Email

    Related Posts

    July 7, 2025 ಅರ್ಜಿ ಆಹ್ವಾನ

    ಜು.9 ರಂದು ಖಾಲಿ ಹುದ್ದೆಗಳಿಗೆ ನೇರ ಸಂದರ್ಶನ

    July 7, 2025 ಸಿನೆಮಾ

    ‘ಎಲ್ಟು ಮುತ್ತಾ’ ಚಿತ್ರ ಜುಲೈ ಕೊನೆಯ ವಾರದಲ್ಲಿ ಬಿಡುಗಡೆಗೆ

    July 5, 2025 ಬಾಗಲಕೋಟೆ

    ನಾಳೆ ಪ್ರತಿಭಾ ಪುರಸ್ಕಾರ- ಸಾಧಕರಿಗೆ ಸನ್ಮಾನ

    July 5, 2025 ಅರ್ಜಿ ಆಹ್ವಾನ

    ಕ.ರಾ.ಮು.ವಿ. ಪ್ರಥಮ ವರ್ಷದ ಪ್ರವೇಶಾತಿ ಪ್ರಾರಂಭ

    July 5, 2025 ಅರ್ಜಿ ಆಹ್ವಾನ

    ಅಲ್ಪಸಂಖ್ಯಾತ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ

    July 4, 2025 ಸಿನೆಮಾ

    ‘ರಾಮಾಯಣ’ ಚಿತ್ರದ Introduction ವಿಡಿಯೋ ಬಿಡುಗಡೆ

    Facebook X (Twitter) Instagram Pinterest
    • Privacy Policy
    © 2025 Sanjedarshan. Developed by Vikimediatec Pvt Ltd.
    ಮಹೇಶ ಅಂಗಡಿ , ಸಂಪಾದಕರು, ಸಂಜೆದರ್ಶನ ದಿನ ಪತ್ರಿಕೆ, ಶಿವಗಿರಿ ಬಡಾವಣೆ 6ನೇ ಕ್ರಾಸ್, ವಿದ್ಯಾಗಿರಿ, ಬಾಗಲಕೋಟೆ-587102. ಮೋ: 9845228092

    Type above and press Enter to search. Press Esc to cancel.