ಬಾಗಲಕೋಟೆ: ಜಿಲ್ಲಾದ್ಯಂತ ಡಿಎಪಿ ನಕಲಿ ರಸಗೊಬ್ಬರ ಪೂರೈಕೆ ಹಾವಳಿ ನಡೆಯುತ್ತಿದ್ದು, ನಕಲಿ ರಸಗೊಬ್ಬರ ತಯಾರಕರ ಹಾಗೂ ಪೂರೈಕೆ ಮಾಡುವವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಭಾರತೀಯ ಕಿಸಾನ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಆಗ್ರಹಿಸಿದ್ದಾರೆ.
ಗುರುವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಕಲಿ ರಸಗೊಬ್ಬರ ಪೂರೈಸುವ ಸಮಯದಲ್ಲಿ ಪೂರೈಕೆದಾರರನ್ನು ರೈತ ಸಂಘಟನೆಗಳು ಹಿಡಿದು ಬಾದಾಮಿ ತಾಲೂಕಿನ ಕೆರೂರ ಪೊಲೀಸ್ ಠಾಣೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳಿಂದ ಪ್ರಕರಣ ದಾಖಲಾಗಿದೆ. ಈ ರೀತಿ ಅನಕ್ಷರಸ್ಥರು ರೈತರು ನಕಲಿ ರಸಗೊಬ್ಬರವನ್ನು ಬೆಳೆಗಳಿಗೆ ಹಾಕುವುದರಿಂದ ಯಾವುದೇ ಬೆಳೆ ಬಾರದೆ ರೈತರು ಸಂಕಷ್ಟಕ್ಕೆ ಪಡುವ ಪರಿಸ್ಥಿತಿ ನಿರ್ಮಾಣವಾಗುತ್ತೆ ಎಂದ ಅವರು, ಡಿಎಪಿ ನಕಲಿ ರಸಗೊಬ್ಬರ ತಯಾರಕರ ಹಾಗೂ ಪೂರೈಕೆ ಮಾಡುವವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜ ಗೋನಾಳ, ಪರಶುರಾಮ ಮಂಟೂರ, ಮಲ್ಲಪ್ಪ ಗಾಣಗೇರ, ಅರುಣ ಕಟ್ಟಿಮನಿ, ಸಿದ್ರಾಮ ಮತ್ತಿತರರು ಇದ್ದರು.