ಬಾಗಲಕೋಟೆ: ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ 60ನೇ ವರ್ಧಂತಿ ಮಹೋತ್ಸವವು ಶ್ರೀಗಳ ಉಪಸ್ಥಿತಿಯಲ್ಲಿ ಜೂ.20 ರಿಂದ ಜೂ.27ರವರೆಗೆ ನಗರದಲ್ಲಿ ಅದ್ಧೂರಿಯಾಗಿ ಜರುಗಲಿದೆ ಎಂದು ಪಂ. ರಘೋತ್ತಮಾಚಾರ್ಯ ನಾಗಸಂಪಿಗೆ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯ ಶ್ರೀರಾಮ ಮಂದಿರದ ಟ್ರಸ್ಟಿಗಳೂ ಆಗಿರುವ ಶ್ರೀಗಳು ಗೋಶಾಲೆ, ವಿಕಲಚೇತನ ಮಕ್ಕಳ ಪಾಲನಾ ಕೇಂದ್ರ, ಶಿಕ್ಷಣ ಸಂಸ್ಥೆ, ಶಾಸ್ತ್ರ ಸೇವೆ, ಧಾರ್ಮಿಕ ಕೇಂದ್ರಗಳ ಮೂಲಕ ಸಮಾಜ ಸುಧಾರಣಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಶ್ರೀಗಳ ೬೦ ನೇ ವರ್ಧಂತಿಯನ್ನು ಅತ್ಯಂತ ವಿಜೃಂಭಣೆಯಿAದ ಜರುಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜೂ.20ರಂದು ಸಂಜೆ ೫.೩೦ಕ್ಕೆ ಶ್ರೀಗಳು ಪುರಪ್ರವೇಶಿಸಲಿದ್ದು, ವಿದ್ಯಾಗಿರಿ ಕಾಲೇಜು ಸರ್ಕಲ್ನಿಂದ ವಿಪ್ರ ಅಭಿವೃದ್ಧಿ ಸಂಘದ ರಾಯರ ಮಠದವರೆಗೆ ಬೃಹತ್ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. 6.30ಕ್ಕೆ ಪಂ.ಆನAದತೀರ್ಥಾಚಾರ್ಯ ನಾಗಸಂಪಗಿ ಅವರು ಪ್ರವಚನ ನೀಡಲಿದ್ದು, ನಂತರ ಶ್ರೀಗಳಿಂದ ಅನುಗ್ರಹ ಸಂದೇಶ ಇರಲಿದೆ.
ಜೂ.21ರಂದು ಸಂಜೆ 6 ರಿಂದ 8.30ರವರೆಗೆ ಬೆಂಗಳೂರಿನ ಪಂ.ರಾಮವಿಠ್ಠಲಾಚಾರ್ಯರಿಂದ ಉಪನ್ಯಾಸ, ಜೂ.22ರಂದು ಸಂಜೆ ಪಂ. ವೇಣುಗೋಪಾಲಾಚಾರ್ಯ ಅಗ್ನಿಹೋತ್ರಿ ಅವರಿಂದ ಪ್ರವಚನ, ಜೂ.೨೩ ರಂದು ಸಂಜೆ ಪಂ.ಮಧ್ವಾಚಾರ್ಯ ಮೊಕಾಶಿ ಅವರಿಂದ ಪ್ರವಚನ, ಜೂ.24ರ ಸಂಜೆ ಚಕ್ರವರ್ತಿ ಸೂಲಿಬೆಲೆ ಅವರಿಂದ ಲೌಕಿಕ ಉಪನ್ಯಾಸ, ಜೂ.25 ರಂದು ಸಂಜೆ ಪಂ.ಕೃಷ್ಣರಾಜ ಕುತ್ಪಾಡಿಯಾಚಾರ್ಯರಿಂದ ಉಪನ್ಯಾಸ, ಜೂ.26ರಂದು ಬೆಂಗಳೂರಿನ ಪಂ.ಬ್ರಹ್ಮಣಾಚಾರ್ಯರಿAದ ಪ್ರವಚನ ಕಾರ್ಯಕ್ರಮ ಜರುಗಲಿದೆ ಎಂದು ವಿವರಿಸಿದರು. ಪ್ರತಿದಿನ ಸಂಜೆ ಪ್ರವಚನ ಕಾರ್ಯಕ್ರಮಗಳು ವಿದ್ಯಾಗಿರಿ ವಿಪ್ರ ಅಭಿವೃದ್ಧಿ ಸಂಘದ ಆವರಣದಲ್ಲಿ ಜರುಗಲಿವೆ ಎಂದು ಮಾಹಿತಿ ನೀಡಿದರು.
ಜೂ.27ರಂದು ಬೆಳಗ್ಗೆ 7 ರಿಂದ 10.30ರವರೆಗೆ ಪಾದಪೂಜೆ ಜರುಗಲಿದೆ. ಶ್ರೀಗಳಿಂದ ಪ್ರತಿದಿನ ಶ್ರೀಮಧ್ವಕರಾರ್ಚಿತ ಶ್ರೀರಾಮವಿಠ್ಠಲ ದೇವರ ಪೂಜೆ ಜರುಗಲಿದೆ. ಶ್ರೀಗಳು ಸಾಮಾಜಿಕ ಕ್ಷೇತ್ರದಲ್ಲಿ ಅದರಲ್ಲೂ ಹಿಂದೂ ಸಮಾಜದ ಸಂಘಟನೆಯಲ್ಲಿ ತೊಡಗಿರುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದು ಕೋರಿದರು.
ಕಾರ್ಯಕ್ರಮದ ಸ್ವಾಗತ ಸಮಿತಿ ಉಪಾಧ್ಯಕ್ಷ ಡಾ.ಗಿರೀಶ ಮಾಸೂರಕರ ಅವರು ಮಾತನಾಡಿ, ಶ್ರೀಗಳ ಕಾರ್ಯಕ್ರಮವು ನಗರದಲ್ಲಿ ಅದ್ಧೂರಿಯಾಗಿ ಜರುಗಲಿದೆ. ಸಕಲ ಹಿಂದೂ ಸಮಾಜದ ಸಂಘಟನೆಗೆ ಶ್ರೀಗಳು ಶ್ರಮಿಸುತ್ತಿದ್ದಾರೆ. ಅಯೋಧ್ಯೆ ರಾಮಮಂದಿರ ನಿರ್ಮಾಣದ ನಂತರ ೪೮ ದಿನಗಳ ಮಂಡಲ ಪೂಜೆಯಲ್ಲೂ ಶ್ರೀಗಳು ಭಾಗಿಯಾಗಿದ್ದರು ಎಂದು ವಿವರಿಸಿದರು.
ಶ್ರೀಗಳ ಕಾರ್ಯಕ್ರಮಕ್ಕಾಗಿ ಸ್ವಾಗತ ಸಮಿತಿ ರಚನೆಯಾಗಿದೆ. ಪಂ.ರಘೋತ್ತಮಾಚಾರ್ಯ ನಾಗಸಂಪಿಗೆ, ಪಂ.ಭೀಮಸೇನಾಚಾರ್ಯ ಪಾಂಡುರಂಗಿ, ಪಂ. ಬಿಂದುಮಾಧವಾಚಾರ್ಯ ನಾಗಸಂಪಿಗೆ ಅವರು ಮಾರ್ಗದರ್ಶಕರಾಗಿ ಇರಲಿದ್ದಾರೆ. ಊರಿನ ಹಿರಿಯರಾದ ಎಸ್.ಬಿ.ಸತ್ಯನಾರಾಯಣ ಅವರು ಗೌರವಾಧ್ಯಕ್ಷರಾಗಿದ್ದು, ಕೆ.ರಾಘವೇಂದ್ರ ರಾವ್ ಅಧ್ಯಕ್ಷರಾಗಿದ್ದಾರೆ. ಗಣ್ಯರು ಸಮಿತಿಯಲ್ಲಿದ್ದಾರೆ ಎಂದರು.
ಸ್ವಾಗತ ಸಮಿತಿ ಉಪಾಧ್ಯಕ್ಷ ನರಸಿಂಹ ಆಲೂರ, ಕಾರ್ಯದರ್ಶಿಗಳಾದ ಎಸ್.ಕೆ.ಕುಲಕರ್ಣಿ, ನಾರಾಯಣ ದೇಸಾಯಿ, ಶ್ರೀಹರಿ ಪಾಟೀಲ, ಗೌರವ ಕಾರ್ಯದರ್ಶಿ ಪವನ ಸೀಮಿಕೇರಿ, ಸಹಕಾರ್ಯದರ್ಶಿ ಅನಂತ ಮಳಗಿ, ಅನಂತ ಬೆಳ್ಳುಬ್ಬಿ ಇತರರು ಇದ್ದರು.